br-ambedkar

Ambedkar Quotes in Kannada | ಡಾ. ಬಿ.ಆರ್. ಅಂಬೇಡ್ಕರ್ ನುಡಿಮುತ್ತುಗಳು

Status

ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಶ್ರೇಷ್ಠ ವ್ಯಕ್ತಿತ್ವದ ಭಾರತೀಯ ಪ್ರಜೆಯಾಗಿದ್ದರು. ಅಂತಹ ದಂತಕಥೆಗೆ ಗೌರವವನ್ನು ನೀಡಲು ಅನೇಕ ಭಾಷೆಗಳಲ್ಲಿ ಅನೇಕ ಕವಿತೆಗಳು ಮತ್ತು ಉಲ್ಲೇಖಗಳನ್ನು ಬರೆಯಲಾಗಿದೆ.

ಜೀವನದ ಪ್ರತಿ ಹಂತದಲ್ಲೂ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವ ಅವರ ಪರಂಪರೆ ಮತ್ತು ಚಿಂತನೆಗಳನ್ನು ನೆನಪಿಟ್ಟುಕೊಳ್ಳಲು ಕನ್ನಡದಲ್ಲಿ ಅಂಬೇಡ್ಕರ್ ಜಯಂತಿಯ ಕೆಲವು ಉಲ್ಲೇಖಗಳು ಇಲ್ಲಿವೆ.

ಸಾಮಾಜಿಕ ದಬ್ಬಾಳಿಕೆ ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ…

ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರ ಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ….

ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ, ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ…

ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮರಕ್ಷಣೆಗೆ ಸಮರ್ಥವಾಗಿಬಲ್ಲದು. ಇಂತಹ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದುಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು …

ಮಿಲ್ ನ ಸಿದ್ಧಾಂತವಾದ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರವನ್ನು ಆಳಲು ಸಮರ್ಥವಲ್ಲ, ಎಂಬ ಮಾತನ್ನು ಯಾರು ನಂಬುತ್ತಾರೋ ಅವರು ಒಂದು ವರ್ಗವು ಇನ್ನೊಂದು ವರ್ಗವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನೂ ನಂಬಲೇಬೇಕು

ಪುರುಷರು ಒಂದು ರೀತಿಯ ವೈರ ಮನೋಭಾವದವರು, ಅವರ ಆಲೋಚನೆಗಳೂ ಇದೇ ರೀತಿಯದ್ದಾಗಿದೆ, ಒಂದು ಕಲ್ಪನೆಗೆ ಅಥವಾ ಯೋಚನೆಗೆ ಅದರ ಹಿಂದಿನ ಯೋಜನೆ ಎಷ್ಟು ಮುಖ್ಯವೋ ಆ ಯೋಚನೆಯ ಪ್ರಸರಣವೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಆ ಯೋಚನೆಗೆ ಸಾವು ಖಂಡಿತ

ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ, ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ…

ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ, ಇಲ್ಲವಾದರೆ ಎರಡು ಸಾಯುತ್ತವೆ…

ಕೇಳದೆ ಬೇಡಿದ್ದನ್ನು ಕೊಟ್ಟವರು, ಕೇಳದೆ ನಮಗೆ ದಾರಿ ತೋರಿಸಿಕೊಟ್ಟವರು, ಕೇಳದೆ ನಮಗೆ ಶಿಕ್ಷಣ ಕೊಟ್ಟವರು, ಕೇಳದೆ ನಮಗೆ ಸ್ವತಂತ್ರ ಬದುಕು ಕೊಟ್ಟವರು, ಇವರು ನಿಜವಾದ ದೇವರು…

Leave a Reply